ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಕಾನೂನಿನ ಅರಿವು ಮತ್ತು ನೆರವು ಕರ‍್ಯಕ್ರಮ

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ಮಕ್ಕಳಿಗೆ ಕಾನೂನಿನ ಅರಿವು ಮತ್ತು ನೆರವು ಕರ‍್ಯಕ್ರಮವನ್ನು ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಜೇಂದ್ರ ನಗರ ಶಿವಮೊಗ್ಗದಲ್ಲಿ ನಡೆಸಿ ಕೊಡಲಾಯಿತು, ಈ ಸಂರ‍್ಭದಲ್ಲಿ ಹೆಚ್ ಆರ್ ಎ ಸಿ ಎಫ್ ನಾ(ಊಖಂಅಈ) ರಾಜ್ಯ ಉಪಾಧ್ಯಕ್ಷರಾದ ವಿಶ್ವನಾಥ್ ನಾಯಕ್ ರವರು ಮತ್ತು ಹೆಚ್ಆರ್ ಎಸಿ ಎಫ್ ನಾ ಜಿಲ್ಲಾ ಅಧ್ಯಕ್ಷರಾದ ಆದಿತ್ಯ ಅರುಣ್ ಕುಮಾರ್ ರವರು ಹಾಗೂ ಪದಾಧಿಕಾರಿಗಳಾದ, ಸಾಗರ್ , ಪವನ್, ಮಹೇಶ್ ,ಅತಿತ್ ಶ್ರೇಯಸ್ ತೇಲ್ಕರ್, ಮತ್ತು ಶಾಲೆಯ ಪ್ರಾಂಶುಪಾಲರಾದ ಕುಮಾರಸ್ವಾಮಿ ರವರು ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ ಹಿರಿಯ ಶಿಕ್ಷಕರಾದ ಗುರುಮರ‍್ತಿ ಗೌಡರು ಮತ್ತು ಶಿಕ್ಷಕ ವೃಂದದವರು ಹಾಗೂ ಶಾಲಾ ಮಕ್ಕಳುಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕರ‍್ಯಕ್ರಮದಲ್ಲಿ ಮಕ್ಕಳಿಗೆ ಕಾನೂನಿನ ಅರಿವನ್ನು ಮೂಡಿಸುವುದರ ಮೂಲಕ ಅತಿಥಿಗಳಾದ ವಿಶ್ವನಾಥ್ ನಾಯಕ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಈ ಸಂರ‍್ಭದಲ್ಲಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸುವುದರ ಮೂಲಕ ಕರ‍್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Leave a Reply

Your email address will not be published. Required fields are marked *