ಆ. 4 ರಂದು ಕ. ಸು. ಸ.ಪ.ದ ಸರ್ವ ಸದಸ್ಯರ ಮಹಾಸಭೆ

ವಮೊಗ್ಗ : ಕರ್ನಾಟಕ ಸುಗಮ ಸಂಗೀತ ಪರಿಷತ್ ರಾಜ್ಯ ಸಮಿತಿಯ ಸರ್ವ ಸದಸ್ಯರ ಮಹಾಸಭೆಯನ್ನು ಬೆಂಗಳೂರಿನ ಜಯನಗರ 4ನೇ ಬಡಾವಣೆಯ 36ನೇ ಅಡ್ಡ ಬಡಾವಣೆಯ ಸನಾತನ ಕಲಾ ಕ್ಷೇತ್ರದಲ್ಲಿ. ಆಗಸ್ಟ್ 4 ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಕರೆಯಲಾಗಿದೆ ಎಂದು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿವಿ ಪ್ರವೀಣ್ ತಿಳಿಸಿದ್ದಾರೆ
ಕರ್ನಾಟಕ ಸುಗಮ ಸಂಗೀತ ಪರಿಷತ್ ರಾಜ್ಯಾಧ್ಯಕ್ಷರಾದ ವೈ ಕೆ ಮುದ್ದುಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಮಹತ್ವಪೂರ್ಣ ಸಭೆಯಲ್ಲಿ 2023 24 ನೇ ಸಾಲಿನ ಪರಿಶೋಧಿತ ಆಯವ್ಯಯ ಲೆಕ್ಕ ಪತ್ರ ಮಂಡನೆ. ಅನುಮೋದನೆ 2024 25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ರೂಪರೇಷೆ. ವಿಚಾರ ವಿನಿಮಯ. ಹಾಗೂ ಮುಂದಿನ ಗೀತೋತ್ಸವದ ಬಗ್ಗೆ ಚರ್ಚೆ ಕರ್ನಾಟಕದ ವಿವಿಧ ಜಿಲ್ಲೆಗಳ ತಾಲೂಕುಗಳ ಚಟುವಟಿಕೆ. ಜಿಲ್ಲೆ ತಾಲೂಕುಗಳ ನೂತನ ಘಟಕಗಳ ಸ್ಥಾಪನೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪರಿಷತ್ತಿನ ರಾಜ್ಯ ಸಮಿತಿಯ ಖಜಾಂಚಿ ಪ್ರಶಾಂತ್ ಉಡುಪ ತಿಳಿಸಿದ್ದಾರೆ. ಈ ಸಭೆಗೆ ಶಿವಮೊಗ್ಗ ಜಿಲ್ಲಾ ಘಟಕ ತಾಲೂಕು ತಾಲೂಕು ಘಟಕ. ಹೊಸನಗರ ಸಾಗರ ಸೊರಬ ತಾಲೂಕು ಘಟಕ ಹಾಗು ಹೋಬಳಿ ಘಟಕದ ರಿಪ್ಪನ್ ಪೇಟೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಧ್ಯಕ್ಷರಾದ ಶಾಂತ ಎಸ್ ಶೆಟ್ಟಿ ಕೋರಿದ್ದಾರೆ.

Leave a Reply

Your email address will not be published. Required fields are marked *